ರಾಜ್‌ ಅಪಹರಣಕ್ಕೆ 25 ವರ್ಷ| ನಕ್ಕೀರನ್‌ ಹೇಳಿದ ದಂತವಿಲ್ಲದ ಆನೆ ಕಥೆ

ಕನ್ನಡ ಮೇರು ನಟ ಡಾ. ರಾಜಕುಮಾರ್ 25 ವರ್ಷಗಳ ಹಿಂದೆ ವೀರಪ್ಪನ್ ಎಂಬ ದಂತ ಚೋರನಿಂದ ಅಪಹರಣಕ್ಕೆ ಒಳಗಾಗಿದ್ದರು. ಇದು ಕರುನಾಡಿನ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ರಾಜ್ ಅಪಹರಣ ಸಂದರ್ಭದಲ್ಲಿ ವೀರಪ್ಪನ್ ಜೊತೆ ಸಂಧಾನ ಮಾಡಲು ಸಹಕರಿಸಿದ್ದ ನಕ್ಕೀರನ್‌ ಗೋಪಾಲ್‌ ಅವರನ್ನು ಆಗ ಪತ್ರಕರ್ತ ಹಾಗೂ ಕಥೆಗಾರ ಕನಕರಾಜು ಸಂದರ್ಶನ ನಡೆಸಿದ್ದರು. ಈ ಕುರಿತು 25 ವರ್ಷಗಳ ಹಿಂದಿನ ನೆನಪುಗಳನ್ನು ಕನಕ ರಾಜು ಅವರು ತಾಯ್ನಾಡು.ನ್ಯೂಸ್ ನೊಂದಿಗೆ ಹಂಚಿಕೊಂಡಿದ್ದಾರೆ.
Rajkumar Kidnapping

2000ರ ಜುಲೈ, ಕರ್ನಾಟಕದ ಇತಿಹಾಸದಲ್ಲಿ ಮರೆಯಲಾಗದ ಸಂದರ್ಭ. ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್‌ ಅವರ ಅಪಹರಣದ ಸುದ್ದಿಯಿಂದ ಇಡೀ ರಾಜ್ಯವೇ ತಲ್ಲಣಗೊಂಡಿತ್ತು. ಈ ಸಂಕಷ್ಟದ ಸಮಯದಲ್ಲಿ ಒಬ್ಬರೇ ಒಬ್ಬರು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ವೀರಪ್ಪನ್‌ನಿಂದ ನೇರ ಮಾಹಿತಿಯನ್ನು ತಂದುಕೊಡುತ್ತಿದ್ದರು. ಆ ವ್ಯಕ್ತಿ ನಕ್ಕೀರನ್‌ ಗೋಪಾಲ್‌, ಈತ ತಮಿಳುನಾಡಿನ ‘ನಕ್ಕೀರನ್‌’ ವಾರಪತ್ರಿಕೆಯ ಸಂಪಾದಕ.

ನಕ್ಕೀರನ್‌ ಗೋಪಾಲ್‌ ಅವರಿಗೆ ವೀರಪ್ಪನ್‌ನೊಂದಿಗೆ ನೇರ ಸಂಪರ್ಕವಿತ್ತು. ರಾಜ್‌ಕುಮಾರ್‌ ಅವರ ಆರೋಗ್ಯ, ವೀರಪ್ಪನ್‌ನ ಬೇಡಿಕೆಗಳು, ಮತ್ತು ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಅವರು ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದರು. ಅವರ ಮಾತುಗಳೇ ಅಧಿಕೃತವಾಗಿದ್ದವು. ಆದರೆ, ಕರ್ನಾಟಕದ ಯಾವುದೇ ಮಾಧ್ಯಮವು ಇದುವರೆಗೆ ನಕ್ಕೀರನ್‌ ಅವರನ್ನು ಸಂದರ್ಶಿಸಿರಲಿಲ್ಲ. ಈ ಸಂದರ್ಭದಲ್ಲಿ ಪ್ರಸರಣೆಯಲ್ಲಿದ್ದ , ಕನ್ನಡದ ‘ಆಕೃತಿ’ ಪಾಕ್ಷಿಕ ಪತ್ರಿಕೆಯ ಉಪಸಂಪಾದಕ ಮತ್ತು ವರದಿಗಾರ ಕನಕರಾಜು ಅವರು ಸಂದರ್ಶನ ಮಾಡಲು ಮುಂದಾದರು. ಅವರು ಚೆನೈಗೆ ತೆರಳಿ, ರಾಜ್‌ಕುಮಾರ್‌ ಅಪಹರಣವಾಗಿ ಹತ್ತು ದಿನಗಳಾದ ನಂತರ, ನಕ್ಕೀರನ್‌ ಗೋಪಾಲ್‌ ಅವರೊಂದಿಗೆ ಕನ್ನಡದಲ್ಲಿ ಮೊದಲ ಸಂದರ್ಶನವನ್ನು ಮಾಡಿದ್ದರು.

ಸಂದರ್ಶನದ ಕ್ಷಣಗಳು

ಕನಕರಾಜು ಅವರಿಗೆ ಈ ಸಂದರ್ಶನಕ್ಕೆ ಮೂರು ದಿನಗಳ ಕಾಯುವಿಕೆಯ ನಂತರ ಅವಕಾಶ ಸಿಕ್ಕಿತು. “ನಾನು ಆಗ ಇನ್ನೂ ವಿದ್ಯಾರ್ಥಿಯಾಗಿದ್ದೆ. ಆದರೂ, ರಾಜ್‌ಕುಮಾರ್‌ ಅವರ ಅಪಹರಣದ ಬಗ್ಗೆ ಇಡೀ ಕರ್ನಾಟಕದ ಆತಂಕವನ್ನು ನಕ್ಕೀರನ್‌ ಅವರಿಗೆ ಮನದಟ್ಟು ಮಾಡಿದೆ,” ಎಂದು ಕನಕರಾಜು ಹೇಳುತ್ತಾರೆ. ಸಂದರ್ಶನದಲ್ಲಿ, ರಾಜ್‌ಕುಮಾರ್‌ ಅವರ ಆರೋಗ್ಯ, ವೀರಪ್ಪನ್‌ನ ಬೇಡಿಕೆಗಳು ಮತ್ತು ಅವರನ್ನು ಕಾಡಿನಲ್ಲಿ ಸ್ಥಳಾಂತರಿಸುವ ರೀತಿಯ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು.

ನಕ್ಕೀರನ್‌ ಗೋಪಾಲ್‌ ಹೇಳಿದಂತೆ, “ವೀರಪ್ಪನ್‌ ಮತ್ತು ಆತನ ಸಹಚರರು ರಾಜ್‌ಕುಮಾರ್‌ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು. ಅವರನ್ನು ‘ಅಣ್ಣಾ’ ಎಂದು ಗೌರವದಿಂದ ಕರೆಯುತ್ತಿದ್ದರು. ಆದರೆ,  ಮೊದಲು ರಾಜ್‌ಕುಮಾರ್‌ ಸ್ವಲ್ಪ ಗಲಿಬಿಲಿಯಾಗಿದ್ದರು. ನಂತರ ಅವರು ಸರಿಹೋದರು.” ವೀರಪ್ಪನ್‌ನ ಮೂರು ಪ್ರಮುಖ ಬೇಡಿಕೆಗಳ ಬಗ್ಗೆಯೂ ಗೋಪಾಲ್‌ ಮಾಹಿತಿ ನೀಡಿದರು. “ಪ್ರತಿ ಆರು ಗಂಟೆಗೊಮ್ಮೆ ರಾಜ್‌ಕುಮಾರ್‌ ಅವರನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ತುಂಬಾ ಜಾಗರೂಕತೆಯಿಂದ ಸ್ಥಳಾಂತರಿಸಲಾಗುತ್ತಿತ್ತು,” ಎಂದು ಅವರು ವಿವರಿಸಿದರು.

ದಂತವಿಲ್ಲದ ಆನೆ ಕಥೆ

ಸಂದರ್ಶನದಲ್ಲಿ ನಕ್ಕೀರನ್‌ ಗೋಪಾಲ್‌ ಒಂದು ರೋಚಕ ಮತ್ತು ರೋಮಾಂಚಕ ಘಟನೆಯನ್ನು ಹಂಚಿಕೊಂಡರು. ರಾಜ್‌ಕುಮಾರ್‌ ಮತ್ತು ಇತರರನ್ನು ಸ್ಥಳಾಂತರಿಸುವಾಗ, ಕಾಡಿನ ದಾರಿಯಲ್ಲಿ ಒಂದು ದಂತವಿಲ್ಲದ ಆನೆ ಮೇಲಿನಿಂದ ಕೆಳಗೆ ಧಾವಿಸುತ್ತಿರುವುದನ್ನು ಯಾರೂ ಗಮನಿಸಿರಲಿಲ್ಲ. “ನಾನೂ ಆ ಸಂದರ್ಭದಲ್ಲಿ ರಾಜ್‌ಕುಮಾರ್‌ ಜೊತೆಗಿದ್ದೆ,” ಎಂದು ಗೋಪಾಲ್‌ ಹೇಳಿದರು. ವೀರಪ್ಪನ್‌ನ ಗುಪ್ತಚರರು ಮರದ ಮೇಲಿಂದ ಎಲ್ಲವನ್ನೂ ಗಮನಿಸುತ್ತಿದ್ದರು. ಆಗ ದಿಢೀರ್‌ ಎಂದು ವೀರಪ್ಪನ್‌ ಎಲ್ಲರನ್ನೂ ತಡೆದರು. “ಅವನ ಬಲಗೈ ಭಂಟ ಸೇತುಕುಳಿ ಗೋವಿಂದನಿಗೆ ಏನೋ ಸೂಚನೆ ಸಿಗುತ್ತದೆ. ನಂತರ ಎಲ್ಲರೂ ಎಡಭಾಗಕ್ಕೆ ಸರಿಯುತ್ತಾರೆ. ಸರಿದ ಎರಡೇ ಕ್ಷಣಕ್ಕೆ, ಬೆಟ್ಟದ ಮೇಲಿದ್ದ ಆನೆ ಕೆಳಗೆ ಬೀಳುತ್ತದೆ. ಒಂದು ವೇಳೆ ಸ್ವಲ್ಪ ತಡವಾಗಿದ್ದರೆ, ಆನೆ ನಮ್ಮ ಮೇಲೆ ಬಿದ್ದಿರುತ್ತಿತ್ತು,” ಎಂದು ಗೋಪಾಲ್‌ ರೋಮಾಂಚಕವಾಗಿ ವಿವರಿಸಿದರು. ಈ ಘಟನೆಯಿಂದ ರಾಜ್‌ಕುಮಾರ್‌ ಅವರ ಮುಖದಲ್ಲಿ ಸ್ವಲ್ಪ ಭಯ ಕಾಣಿಸಿತು ಎಂದೂ, ತಾನೂ ಭಯಭೀತನಾಗಿದ್ದೆ ಎಂದೂ ಗೋಪಾಲ್‌ ಹೇಳಿದರು.

ಇದನ್ನೂ ಓದಿ | ಡಾ. ರಾಜ್‌ಕುಮಾರ್ ಅಪಹರಣ: ಇಂದಿಗೆ 25 ವರ್ಷ

 ಇದರ ಜೊತೆಗೆ ಕನಕರಾಜು ಅವರು ತಮ್ಮ ಜೀವನದ ಅವರು ಮಾಡಿರುವ ದೊಡ್ಡ ತಪ್ಪೆಂದರೆ “ನನಗೆ ತಮಿಳು ಚೆನ್ನಾಗಿ ಬರುತ್ತಿತ್ತು. ಬಹುಶಃ ನಕ್ಕೀರನ್‌ ಗೋಪಾಲ್‌ ಅವರು ನನ್ನನ್ನು ತಮ್ಮ ಜೊತೆ ಕಾಡಿಗೆ ಕರೆದುಕೊಂಡು ಹೋಗುತ್ತಿದ್ದರೇನೋ. ರಾಜ್‌ಕುಮಾರ್‌ ಅವರನ್ನು ಭೇಟಿಯಾಗಲು ವೀರಪ್ಪನ್‌ ಬಳಿಗೆ ಕರ್ನಾಟಕದಿಂದ ಒಬ್ಬ ಪತ್ರಕರ್ತನಾಗಿ ನಾನು ಹೋಗಬಹುದಿತ್ತು. ಆ ಆಸೆಯೂ ಇತ್ತು, ಕೇಳಬೇಕೆಂದುಕೊಂಡಿದ್ದೆ. ಆದರೆ, ಯಾಕೋ ಧೈರ್ಯ ಮಾಡಲಿಲ್ಲ,” ಎಂದು ಕನಕರಾಜು ಖೇದದಿಂದ ನೆನಪಿಸಿಕೊಂಡರು.

 ಇದರ ಜೊತೆಗೆ “ನಕ್ಕೀರನ್‌ ಅವರು ನನ್ನ ಪ್ರಶ್ನೆಗಳನ್ನು ನೋಡಿ ತುಂಬಾ ಖುಷಿಪಟ್ಟಿದ್ದರು. ಅವರ ಪತ್ರಿಕೆಯಲ್ಲಿ ಪ್ರಕಟವಾಗದೇ ಇರುವ ಕೆಲವು ವಿಶೇಷ ಫೋಟೋಗಳನ್ನು ಕೂಡ ನನಗೆ ನೀಡಿದರು,” ಎಂದು ಕನಕರಾಜು ಹೇಳಿದರು. ಈ ಸಂದರ್ಶನದ ನಂತರವೂ ಅವರು ಗೋಪಾಲ್‌ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿಸಿದರು.ಈ ಸಂದರ್ಶನದ ಮೂಲಕ ಕನಕರಾಜು ಅವರು ಕರ್ನಾಟಕದ ಜನತೆಗೆ ರಾಜ್‌ಕುಮಾರ್‌ ಅವರ ಬಗ್ಗೆ ಅತ್ಯಂತ ಮೌಲ್ಯಯುತ ಮಾಹಿತಿಯನ್ನು ತಂದುಕೊಟ್ಟರು ಎನ್ನಬಹುದು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »