ಡಿಜಿಟಲ್ ಕನ್ನಡಕ್ಕೆ ಏನು ಬೇಕು?

ಇಂಟರ್‌ನೆಟ್‌ನಲ್ಲಿ ಕನ್ನಡವನ್ನು ಸಮರ್ಥವಾಗಿ ಬಳಸಲು ಏನು ಮಾಡಬೇಕು, ಯಾವ ಅಂಶಗಳು ಬೇಕು ಎಂದು ಈ ಲೇಖನದಲ್ಲಿ ಅರುಣ್ ಸಿ ಕಲ್ಲಪ್ಪನವರ್ (ಟೈಪ್ ಡಿಸೈನರ್) ತಿಳಿಸಿದ್ದಾರೆ.
reviving-kannada-in-the-digital-age-fonts-grammar

ಕನ್ನಡ ಅತಿ ಶ್ರೀಮಂತ ಭಾಷೆ; ಒಂದು ಪದಕ್ಕೆ ಹಲವಾರು ಸಮಾನಾರ್ಥಕ ಮತ್ತು ನಾನಾರ್ಥಕ ಪದಗಳನ್ನು ಕೊಡಬಲ್ಲ ಅತಿ ದೊಡ್ಡ ಪದ ಸಂಪತ್ತನ್ನು ಹೊಂದಿರುವ ಭಾಷೆ. ಆದರೆ ಇಂದು ಡಿಜಿಟಲ್ ಮಾಧ್ಯಮದಲ್ಲಿ ಏಕೆ ಹಿಂದಿದೆ?

ಒಂದು ಭಾಷೆ ಬೆಳೆಯಲು ಅಥವಾ ಬಳಸಲು ಅದಕ್ಕೆ ಕೆಲವೊಂದು ಮೂಲಭೂತ ಅಂಶಗಳು ಬೇಕು ಅವು ಏನೆಂದರೆ ಮಾತನಾಡಲು ಪದಗಳು, ಬರೆಯಲು ಲಿಪಿ ಮತ್ತು ಭಾಷೆಯನ್ನು ಅರ್ಥ ಮಾಡಿಕೊಳ್ಳಲು ವ್ಯಾಕರಣ. ಆದರೆ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಕಾಲಕಾಲಕ್ಕೂ ಮಾನವನ ಸಂವಹನ ಸುಧಾರಿಸುತ್ತಿದೆ ಈ ಸುಧಾರಣೆಗಳಲ್ಲಿ ಭಾಷೆಯು ಬದಲಾಗುತ್ತದೆ. ಮಾನವನು ಮೊದಲು ಮಾತನಾಡುವುದನ್ನು ಕಲಿತನೋ ಅಥವಾ ಬರೆಯುವುದನ್ನು ಕಲಿತನು ಎಂದು ಪ್ರಶ್ನೆ ಕೇಳಿದರೆ ಮಾನವನು ಬರೆಯುವುದನ್ನು ಶುರುಮಾಡುವ ಬಹಳ ಹಿಂದೆಯೇ ಅವನ ಮೌಖಿಕವಾಗಿ ಭಾಷೆಯನ್ನು ಕಂಡುಕೊಂಡಿದ್ದ ಹಾಗೂ ಒಂದು ಮಾಹಿತಿಯನ್ನು ತಮ್ಮ ಮುಂದಿನ ಪೀಳಿಗೆಯವರಿಗೆ ತಲುಪಿಸಲು ಮಾನವನು ಒಂದು ವಿಧಾನವನ್ನು ಕಂಡುಕೊಳ್ಳಲು ಲಿಪಿಯ ಆವಿಷ್ಕಾರ ಮಾಡಿದ. ಕಾಲಕಾಲಕ್ಕೆ ನಮ್ಮ ಕನ್ನಡ ಭಾಷೆಯು ಹಲವಾರು ರೀತಿಯ ಪರಿವರ್ತನೆಯನ್ನು ಕಂಡಿದೆ ಆದರೆ ಈಗಲೂ ಅದು ಕನ್ನಡವಾಗಿಯೇ ಉಳಿದಿದೆ. ಸಾವಿರಾರು ವರ್ಷ ಬದಲಾವಣೆ, ಸುಧಾರಣೆ ಎಲ್ಲವನ್ನೂ ಕಂಡ ನಮ್ಮ ಕನ್ನಡ ಭಾಷೆ ಇಂದು ಇಂಟರ್ನೆಟ್ ನಲ್ಲಿ ಮತ್ತು ಆಧುನಿಕ ತಂತ್ರಜ್ಞಾನಗಳಿಗೆ ಹೊಂದಿಕೊಂಡು ಬೆಳೆಯಲು ಆಗುತ್ತಿಲ್ಲ; ಎಂಬ ಸತ್ಯವನ್ನು ನಾವು ಮೊದಲು ಗುರುತಿಸಿ ಒಪ್ಪಿಕೊಂಡರೆ ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಾ ಪರಿಹಾರ ಕಂಡುಕೊಳ್ಳಬಹುದು.

ಕಲ್ಲಲ್ಲಿ ಬರೆದ ಕನ್ನಡ, ಕಟ್ಟಿಗೆಯ ಮೇಲೆ ಬರೆಯಲಾಯಿತು, ಎಲೆಗಳ ಮೇಲೆ ಬರೆಯಲಾಯಿತು, ಕಾಗದದ ಮೇಲೆ ಬರೆಯಲಾಯಿತು ಮತ್ತು ಇಂದು ಕಂಪ್ಯೂಟರ್ ಮತ್ತು ಫೋನಿನಲ್ಲಿ ಬರೆಯಲಾಗುತ್ತಿದೆ. ಆದರೆ ಹಿಂದಿನ ಎಲ್ಲಾ ವಿಧಾನದಲ್ಲೂ ಕನ್ನಡ ಎಲ್ಲಾ ಭಾಷೆಗೂ ಸಮಾನವಾಗಿ ನಿಂತಿತ್ತು ಈಗ ಡಿಜಿಟಲೀಕರಣ ವಿಷಯದಲ್ಲಿ ಮಾತ್ರ ಸಮರ್ಥವಾಗಿ ಬಳಸಲು ಆಗುತ್ತಿಲ್ಲ. ಕನ್ನಡಭಾಷೆಯನ್ನು ಡಿಜಿಟಲ್‌ನಲ್ಲಿ ಸಮರ್ಥವಾಗಿ ಬಳಸಲು ಏನು ಬೇಕು?  

ಡಿಜಿಟಲ್ ಕನ್ನಡಕ್ಕೆ ಏನು ಬೇಕು ?

೧. ಫಾಂಟ್‌ಗಳು

೨. ವ್ಯಾಕರಣ ಪರೀಕ್ಷಕ (grammar checker)

೩. ಕೀಲಿಮಣಿ ಲೇಔಟ್

೪. ಭಾಷಾಂತರ ಅಪ್ಲಿಕೇಶನ್

೫. ಹೊಸಪದಗಳನ್ನು ಕನ್ನಡಕ್ಕೆ ರೂಪಾಂತರಿಸುವ ಒಂದು ನಿಘಂಟು

ಯಾರು ಮಾಡಬೇಕು?

ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಬೆಳವಣಿಗೆಯ ಮಾತು ಬಂದರೆ ಇದು ಸರ್ಕಾರ ಮಾಡಬೇಕಾದ ಕೆಲಸ ಅನ್ನಿಸುತ್ತದೆ. ಏಕೆಂದರೆ ಡಿಜಿಟಲ್ ವಿಷಯದಲ್ಲಿ ಏನಾದರೂ ಮಾಡಲು ಸಮಯ ಮತ್ತು ಸಂಪನ್ಮೂಲಗಳು ಬೇಕು, ಒಬ್ಬರೇ ಮಾಡುವಂತಹ ಕೆಲಸವಲ್ಲ. ಇಂಟರ್ನೆಟ್‌ನ ಪ್ರಾರಂಭದಿಂದಲೂ ಡಿಜಿಟಲ್ ಕನ್ನಡದ ವಿಷಯದಲ್ಲಿ ಸರ್ಕಾರ ಮಾಡಿದ ಎಲ್ಲ ಕೆಲಸಗಳನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ಅದು “ಕುದುರೆಗೆ ನೀರು ತೋರಿಸುವ ಕೆಲಸ”. ಮೇಲೆ ಗುರುತಿಸಿದ ಐದು ಅಂಶಗಳು ಈಗಾಗಲೇ ಇದೆ ಎಂದು ಎಲ್ಲರೂ ಹೇಳಬಹುದು. ಆದರೆ, ನಾನು ಮಾತನಾಡುತ್ತಿರುವುದು ಸಮರ್ಥವಾಗಿ ಕನ್ನಡವನ್ನು ಡಿಜಿಟಲ್‌ನಲ್ಲಿ ಬಳಸಲು ಅವು ಹಳೆಯದಾಗಿವೆ ಎಂದು. ನವೀಕರಣದ ಅವಶ್ಯಕತೆ ಇದೆ; ಸರ್ಕಾರ ಬರಿ ಟೆಂಡರ್ ದೃಷ್ಟಿಯಿಂದ ಕನ್ನಡವನ್ನು ನೋಡದೆ ಸಮಯದ ಜೊತೆಗೆ ವಿಕಾಸಗೊಳುವ ಸಮರ್ಥನೀಯ ಬೆಳವಣಿಗೆಯನ್ನು ತರಬೇಕು.

ಡಿಜಿಟಲ್ ಕನ್ನಡಕ್ಕೆ ಬೇಕಾಗಿರುವ ಆ ಐದು ಅಂಶಗಳು ಬಹುಶಿಸ್ತೀಯ ವಿಷಯಗಳಾದರು ಒಂದು ಒಳ್ಳೆಯ ಯೋಜನೆಯ ಮುಕಾಂತರ ಸಾಧಿಸಬಹುದು. 

“ಡಿಜಿಟಲ್ ಯುಗದಲ್ಲಿ ಕನ್ನಡ ಬೆಳೆಯದಿದ್ದರೆ ಅದಕ್ಕೆ ನಾವೆಲ್ಲರೂ ಸಮನಾಗಿ ಕಾರಣ”

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »