ಸ್ವಸಹಾಯ ಸಂಘಗಳ ಸದಸ್ಯರು ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದರು.
ಶನಿವಾರ ಪಾಂಡವಪುರದಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ಹಾಗೂ ಸೆಲ್ಕೊ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಒಂದು ದಿನದ ‘ ಸೌರಶಕ್ತಿ, ಸ್ವ ಉದ್ಯೋಗ ಮೇಳ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಈ ಕಾರ್ಯಕ್ರಮ ಸಾಕಾರವಾಗುವುದು, ಇಲ್ಲಿ ತಿಳಿಯುವ, ಪಡೆದುಕೊಳ್ಳುವ ಮಾಹಿತಿಯನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ. ಗ್ರಾಮೀಣ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಜಿಲ್ಲಾ ಪಂಚಾಯಿತಿ ಸಿಇಒ ಕೆ ಆರ್ ನಂದಿನಿ ಅವರು ಮಾತನಾಡಿ,” ಸ್ವಸಹಾಯ ಸಂಘದ ಸದಸ್ಯರು ಸುತ್ತು ನಿಧಿ ಹಾಗೂ ಬಂಡವಾಳ ನಿಧಿಗಳನ್ನು ಪಡೆಯುವುದಕ್ಕೆ ಅವಕಾಶವಿದೆ. ಅದನ್ನು ಸರಿಯಾದ ರೀತಿ ಬಳಸಿಕೊಂಡು ಕಿರು ಉದ್ಯಮಗಳಲ್ಲಿ ತೊಡಗಬೇಕು. ಇಂದು ಸೌರಶಕ್ತಿ ಆಧಾರಿತ ಯಂತ್ರಗಳನ್ನು ಬಳಸಿಕೊಂಡು ಉದ್ಯಮ ಆರಂಭಿಸುವ ಪ್ರಾತ್ಯಕ್ಷಿಕೆ ಇಲ್ಲಿ ನಡೆಯುತ್ತಿದೆ. ಅದೇ ರೀತಿ ಹಲವು ರೀತಿಯ ಉದ್ಯಮಗಳನ್ನು ನಡೆಸುವುದಕ್ಕೆ ಅವಕಾಶವಿದೆ” ಎಂದರು.
ಮುಂದುವರೆದು ಮಾತನಾಡಿ, “ಉದ್ಯಮಗಳನ್ನು ಆರಂಭಿಸುವ ಜೊತೆಗೆ ಮಾರುಕಟ್ಟೆ ಬಗ್ಗೆಯೂ ಅರಿಯಬೇಕು. ಆಗ ಉದ್ಯಮ ಲಾಭದಾಯಕವಾಗಲು ಸಾಧ್ಯವಿದೆ” ಎಂದು ಅವರು ಹೇಳಿದರು.
ಮಹಿಳೆಯರು ಆರಂಭಿಸಲು ಸಾಧ್ಯವಿರುವ ವಿವಿಧ ಕಿರು ಉದ್ಯಮಗಳ ಕುರಿತು ಮಾಹಿತಿಯನ್ನು ಅವರು ಹಂಚಿಕೊಂಡರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪುಟ್ಟಣ್ಣಯ್ಯ ಫೌಂಡೇಶನ್ ಟ್ರಸ್ಟಿ, ಸ್ಮಿತಾ ಪುಟ್ಟಣ್ಣಯ್ಯ, ಈ ಪ್ರಮಾಣದಲ್ಲಿ ಹೆಣ್ಣುಮಕ್ಕಳು ನೆರೆದಿದ್ದು ನಿಜಕ್ಕೂ ಸಂತೋಷವಾಗುತ್ತಿದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕೆನ್ನುವುದು ಈ ಕಾರ್ಯಕ್ರಮ ಉದ್ದೇಶ. ಇಲ್ಲಿ ಕಲಿಯಲು ಸಾಧ್ಯವಿರುವುದನ್ನು ಕಲಿತು, ಇಲ್ಲಿ ನೆರೆದ ಕೆಲವರಾದರೂ ಸ್ವತಂತ್ರವಾಗಿ ಬದಕಲು ಸಾಧ್ಯವಾದರೆ, ಈ ಕಾರ್ಯಕ್ರಮ ಯಶಸ್ವಿಯಾದಂತೆ. ಸೆಲ್ಕೋ ಫೌಂಡೇಶನ್ ಈ ಪ್ರಯತ್ನಕ್ಕೆ ಕೈಜೋಡಿಸಿದ್ದು ನಿಜಕ್ಕೂ ಈ ಕಾರ್ಯಕ್ರಮ ಸಾಕಾರವಾಗಲು ಸಾಧ್ಯವಾಗಿದೆ ಎಂದರು.
ಪುಟ್ಟಣ್ಣಯ್ಯ ಫೌಂಡೇಶನ್, ರೈನ್ ಮ್ಯಾಟರ್ಸ್, ಸಾಹಸ್, ಆನೋಡ್, ಲರ್ನಿಂಗ್ ಮ್ಯಾಟರ್ಸ್, ಸೇವ್ ಟ್ರೀಸ್, ಜನಾಗ್ರಹ, ಜೀವ ವ್ಯವಸ್ಥೆ ಕಾಡುಗಳು, ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ಜೊತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.
ರೈತ ಸಂಘದ ಮುಖಂಡರಾದ ಕೆನ್ನಾಳು ವಿಜಯ್ ಕುಮಾರ್, ಪಂಚಾಯಿತಿ ಹ್ಯಾಕಾಥಾನ್: ಸರ್ಕಾರಿ ಸೇವೆ ಜನರ ಬಳಿಗೆ ಒಯ್ದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯಅವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಿದರು.
ಮೇಳವನ್ನು ಪುಟ್ಟಣ್ಣಯ್ಯ ಫೌಂಡೇಶನ್ ಟ್ರಸ್ಟಿಗಳಾದ ಸುನೀತಾ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಸೆಲ್ಕೋ ಫೌಂಡೇಶನ್ ವತಿಯಿಂದ ನಾಗೇಶ್, ಪ್ರಕಾಶ್ ಮೇಟಿ, ಸೆಲ್ಕೋ ಫೌಂಡೇಶನ್ ಕಾರ್ಯನಿರ್ವಾಹಕ ನಿದೇಶಕರಾದ ರಣಜೀತ್ ಉಪಸ್ಥಿತರಿದ್ದರು.
ಇದನ್ನೂ ಓದಿ | ಪಂಚಾಯಿತಿ ಹ್ಯಾಕಾಥಾನ್: ಸರ್ಕಾರಿ ಸೇವೆ ಜನರ ಬಳಿಗೆ ಒಯ್ದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ
ಕಾರ್ಯಕ್ರಮದ ಭಾಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಯಶಸ್ವಿ ಕಿರು ಉದ್ಯಮಿಗಳಾದ ಪದ್ಮಾಕ್ಷಿ, ಗಿರಿಜಾ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸೆಲ್ಕೋ ಫೌಂಡೇಶನ್ ವತಿಯಿಂದ ಸೌರ ಚಾಲಿತ ಕಿರು ಉದ್ಯಮಕ್ಕೆ ಅಗತ್ಯವಾದ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.







