SSC ಫೇಸ್ 13 ಪರಿಕ್ಷೆ ಗೊಂದಲ: ಆಕಾಂಕ್ಷಿಗಳ ಪ್ರತಿಭಟನೆ, ಸರ್ಕಾರಕ್ಕೆ ಸವಾಲು  

ಎಸ್ ಎಸ್ ಸಿ ಫೇಸ್ 13 ಪರೀಕ್ಷೆ ನಡೆದಿದೆ. ಆದರೆ, ಈ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಆಕಸ್ಮಿಕ ರದ್ದತಿ, ತಪ್ಪಾದ ಪರೀಕ್ಷಾ ಕೇಂದ್ರ ಹಂಚಿಕೆ ಇತರೆ ಸಮಸ್ಯೆಗಳಿಂದ ಕೂಡಿತ್ತು.
ssc phase13 exam

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ ಎಸ್ ಸಿ) ಫೇಸ್ 13 ಪರೀಕ್ಷೆಯು ಜುಲೈ 24 ರಿಂದ ಆಗಸ್ಟ್ 1, 2025 ರವರೆಗೆ ನಡೆಯಿತು. ಆದರೆ, ಈ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಆಕಸ್ಮಿಕ ರದ್ದತಿ, ಸಾಫ್ಟ್‌ವೇರ್ ಕ್ರ್ಯಾಶ್‌, ಬಯೋಮೆಟ್ರಿಕ್ ದೃಢೀಕರಣ ವೈಫಲ್ಯ ಮತ್ತು ತಪ್ಪಾದ ಪರೀಕ್ಷಾ ಕೇಂದ್ರಗಳ ಹಂಚಿಕೆಯಿಂದ ಕೂಡಿತ್ತು. ಈ ಗೊಂದಲಗಳು ದೆಹಲಿಯಲ್ಲಿ ಸಾವಿರಾರು ಆಕಾಂಕ್ಷಿಗಳನ್ನು ಬೀದಿಗಿಳಿಯುವಂತೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ದೆಹಲಿಯ ಜಂತರ್ ಮಂತರ್ ಮತ್ತು ಸಿಜಿಒ ಕಾಂಪ್ಲೆಕ್ಸ್‌ನಲ್ಲಿ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದು, ಭಾರತದ ಅತಿದೊಡ್ಡ ನೇಮಕಾತಿ ಸಂಸ್ಥೆಯಿಂದ ಜವಾಬ್ದಾರಿಯನ್ನು ಒತ್ತಾಯಿಸಿದ್ದಾರೆ. ತಾಂತ್ರಿಕ ದೋಷ ಮತ್ತು ಪರೀಕ್ಷಾ ದಿನದ ಗೊಂದಲಗಳ ಬಗ್ಗೆ ದೂರುಗಳು ಕೇಳಿಬಂದಿವೆ. ಆಕಾಂಕ್ಷಿಗಳು ಪರೀಕ್ಷಾ ಪ್ರಕ್ರಿಯೆಯ ಸಂಪೂರ್ಣ ಪರಿಶೀಲನೆ, ವೆಂಡರ್ ಒಪ್ಪಂದದ ರದ್ದತಿ ಅಥವಾ ಮರುಮೌಲ್ಯಮಾಪನ ಮತ್ತು ವೈಫಲ್ಯಗಳ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿದ್ದಾರೆ.

ಈ ವರ್ಷದ SSC ಫೇಸ್ 13 ಪರೀಕ್ಷೆಯು 2,423 ಹುದ್ದೆಗಳಿಗೆ 2.9 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳನ್ನು ಆಕರ್ಷಿಸಿತು. ಆದರೆ, ಪರೀಕ್ಷಾ ಕೇಂದ್ರಗಳಲ್ಲಿ ಸರ್ವರ್ ಕ್ರ್ಯಾಶ್‌ಗಳು, ಮೌಸ್ ಕಾರ್ಯನಿರ್ವಹಿಸದಿರುವಿಕೆ, ಮತ್ತು ಬಯೋಮೆಟ್ರಿಕ್ ಸಮಸ್ಯೆಗಳು ಅನೇಕರಿಗೆ ತೊಂದರೆಯನ್ನುಂಟುಮಾಡಿದವು. ಕೆಲವು ಕೇಂದ್ರಗಳಲ್ಲಿ, ಆಕಾಂಕ್ಷಿಗಳು ದೂರದಿಂದ ಪ್ರಯಾಣಿಸಿ ಬಂದ ನಂತರ, ಯಾವುದೇ ಮುಂಗಡ ಸೂಚನೆ ಇಲ್ಲದೆ ಪರೀಕ್ಷೆ ರದ್ದಾಗಿರುವುದನ್ನು ತಿಳಿದು ನಿರಾಸೆಗೊಂಡಿದ್ದಾರೆ. ದೆಹಲಿಯ ಪವನ್ ಗಂಗಾ ಎಜುಕೇಷನಲ್ ಸೆಂಟರ್ 2 ಮತ್ತು ಹುಬ್ಬಳ್ಳಿಯ ಎಡುಕಾಸಾ ಇಂಟರ್‌ನ್ಯಾಷನಲ್‌ನಲ್ಲಿ ಜುಲೈ 24 ರಿಂದ 26 ರವರೆಗಿನ ಪರೀಕ್ಷೆಗಳು ಆಡಳಿತಾತ್ಮಕ ಕಾರಣಗಳಿಂದ ರದ್ದಾಗಿವೆ.

ಈ ಗೊಂದಲಗಳಿಗೆ SSC ಯ ಹೊಸ ವೆಂಡರ್ ಎಡುಕ್ವಿಟಿ ಕ್ಯಾರಿಯರ್ ಟೆಕ್ನಾಲಜೀಸ್‌ಗೆ ಆರೋಪಗಳು ಬಂದಿವೆ. ಆಕಾಂಕ್ಷಿಗಳು ಈ ಕಂಪನಿಯು ದೊಡ್ಡ ಪ್ರಮಾಣದ ಪರೀಕ್ಷೆಗಳನ್ನು ನಿರ್ವಹಿಸಲು ಸಾಮರ್ಥ್ಯವಿಲ್ಲದಿರುವುದಾಗಿ ಆರೋಪಿಸಿದ್ದಾರೆ. ಹಿಂದಿನ ವೆಂಡರ್ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಹೆಚ್ಚು ವಿಶ್ವಾಸಾರ್ಹವಾಗಿತ್ತು ಎಂದು ಅನೇಕರು ಹೇಳಿದ್ದಾರೆ.

ಎಸ್ ಎಸ್ ಸಿ ಅಧ್ಯಕ್ಷರ ಹೇಳಿಕೆ

SSC ಅಧ್ಯಕ್ಷ ಎಸ್. ಗೋಪಾಲಕೃಷ್ಣನ್, “ಕೆಲವು ಕೇಂದ್ರಗಳಲ್ಲಿ ತಾಂತ್ರಿಕ ದೋಷಗಳು ಮತ್ತು ಕಾರ್ಯವಿಧಾನದ ಲೋಪಗಳು ಕಂಡುಬಂದಿವೆ” ಎಂದು ಒಪ್ಪಿಕೊಂಡಿದ್ದಾರೆ. “ಇದು ಹೊಸ ಏಜೆನ್ಸಿಯ ಮೊದಲ ಪರೀಕ್ಷೆಯಾಗಿದ್ದು, ಕೆಲವು ಸಮಸ್ಯೆಗಳು ಎದುರಾಗಿವೆ. ಆದರೆ, ಕೊನೆಯ ಮೂರು ದಿನಗಳಲ್ಲಿ ಗೊಂದಲಗಳು ಕಡಿಮೆಯಾಗಿವೆ, ಮತ್ತು ಭವಿಷ್ಯದಲ್ಲಿ ಇಂತಹ ಸಮಸ್ಯೆಗಳಿಲ್ಲದಂತೆ ಕೆಲಸ ಮಾಡುತ್ತೇವೆ” ಎಂದು ಹೇಳಿದ್ದಾರೆ. 

ಈ ಗೊಂದಲಗಳು ಆಗಸ್ಟ್ 13 ರಿಂದ ಆರಂಭವಾಗಲಿರುವ SSC ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (ಸಿಜಿಎಲ್) ಪರೀಕ್ಷೆಯ 30 ಲಕ್ಷ ಆಕಾಂಕ್ಷಿಗಳಿಗೆ ಆತಂಕವನ್ನುಂಟುಮಾಡಿವೆ. ದೆಹಲಿಯಲ್ಲಿ ನಡೆದ “ದೆಹಲಿ ಚಲೋ” ಪ್ರತಿಭಟನೆಯಲ್ಲಿ ಶಿಕ್ಷಕರು ಮತ್ತು ರಾಜಕೀಯ ನಾಯಕರು ಆಕಾಂಕ್ಷಿಗಳ ಜೊತೆ ಸೇರಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ, 55,000 ಕ್ಕೂ ಹೆಚ್ಚು ದೂರುಗಳು SSC ಗೆ ಸಲ್ಲಿಕೆಯಾಗಿವೆ ಎಂದು ವರದಿಯಾಗಿದೆ. ಆಕಾಂಕ್ಷಿಗಳು ತಮ್ಮ ಕನಸುಗಳಿಗೆ ನ್ಯಾಯ ಕೊಡುವಂತೆ ಒತ್ತಾಯಿಸುತ್ತಿದ್ದಾರೆ, ಮತ್ತು ಈ ಸಮಸ್ಯೆಗಳು ಭಾರತದ ನೇಮಕಾತಿ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳನ್ನು ಎದ್ದಿವೆ.

ಇದನ್ನೂ ಓದಿ | ಬಿಹಾರ ಚುನಾವಣೆ 2025: ತೇಜಸ್ವಿಯ ಹೆಸರು ಕಾಣೆಯೇ? ಇಸಿ ಸ್ಪಷ್ಟನೆ.

ಸರ್ಕಾರವು ಕೂಡಲೆ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡದೆ, ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಪರಿಕ್ಷೆಗಳನ್ನು ಬರೆಯಲು ಮುಂದೆ ಬರುವ ಹಾಗೆ ಪ್ರೋತ್ಸಾಹ ಮಾಡಬೇಕು. ಇಂತಹ ಬೇಜವಾಬ್ದಾರಿತನವನ್ನು ತೋರಿಸಿದರೆ ವಿದ್ಯಾರ್ಥಿಗಳು ಸರ್ಕಾರದ ಮೇಲಿನ ಭರವಸೆಯನ್ನು ಕಳೆದುಕೊಂಡು ದೇಶಾದ್ಯಂತ ಬೀದಿಗೆ ಇಳಿದು ಪ್ರತಿಭಟನೆಗಳನ್ನು ನಡೆಸಿದರೆ ಆಡಳಿತ ಸರ್ಕಾರಗಳು ಉರುಳಿಹೋಗುವ ಸಂದರ್ಭ ಬರಬಹುದು. 

ಈ ರೀತಿ ಘಟನೆಗಳು ನಡೆದಿರುವದು ಮೊದಲೆನಲ್ಲ ಇಂಡಿಯಾ ಟು ಡೇ ವರದಿ ಪ್ರಕಾರ “7 ವರ್ಷದಲ್ಲಿ 70 ಪರಿಕ್ಷೆಗಳು ಸೋರಿಕೆಯಾಗಿದ್ದು, ಇದರಿಂದ 1.7 ಕೋಟಿ ಆಕಾಂಕ್ಷಿಗಳ ಮೇಲೆ ಪರಿಣಾಮ ಬೀರಿದೆ” ಎಂಬ ವರಿಯಾಗಿದೆ. ಇದು ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ಹಾಗೆ ಆಗಿದೆ. ಕೂಡಲೆ ಸಮಸ್ಯೆಗಳಿಗೆ ಸ್ಪಂದಿಸಿ ಮುಂದೆ ಈ ತರಹದ ಲೋಪಗಳು ನಡೆಯದ ಹಾಗೆ ಎಚ್ಚೆತ್ತುಕೊಳ್ಳಬೇಕಾಗಿದೆ. 

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »