ಜಡೇಜಾ ಆರ್‌ಆರ್‌ಗೆ, ಸಂಜು ಸಿಎಸ್‌ಕೆಗೆ: ಐಪಿಎಲ್ ಟ್ರೇಡ್ ಫೈನಲ್!

ಐಪಿಎಲ್‌ ಇತಿಹಾಸದಲ್ಲಿ ಅತ್ಯಂತ ದೊಡ್ಡ ಆಟಗಾರ ವಿನಿಮಯ ಡೀಲ್‌ಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಮೆಗಾ ಟ್ರೇಡ್ ಅಧಿಕೃತವಾಗಿ ಪೂರ್ಣಗೊಂಡಿದೆ.
ipl 2026 mega trade

ಐಪಿಎಲ್‌ ಇತಿಹಾಸದಲ್ಲಿ ಅತ್ಯಂತ ದೊಡ್ಡ ಆಟಗಾರ ವಿನಿಮಯ ಡೀಲ್‌ಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಡುವಿನ ಮೆಗಾ ಟ್ರೇಡ್ ಅಧಿಕೃತವಾಗಿ ಪೂರ್ಣಗೊಂಡಿದೆ. 

ಈ ಡೀಲ್‌ ಪ್ರಕಾರ, ಸಿಎಸ್‌ಕೆಯ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ರಾಜಸ್ಥಾನ್ ರಾಯಲ್ಸ್‌ಗೆ ವರ್ಗಾವಣೆಯಾಗಿದ್ದಾರೆ. ಬದಲಾಗಿ ಆರ್‌ಆರ್‌ನ ನಾಯಕ ಮತ್ತು ವಿಕೆಟ್‌ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಐಪಿಎಲ್‌ 2026 ರಿಟೆನ್ಶನ್ ಡೆಡ್‌ಲೈನ್‌ಗೂ ಮುನ್ನ (ನವೆಂಬರ್ 15) ಈ ಟ್ರೇಡ್ ಅಧಿಕೃತವಾಗಿ ದೃಢಪಡಿಸಲಾಗಿದೆ.

ಈ ಟ್ರೇಡ್‌ನಲ್ಲಿ ಜಡೇಜಾ ಅವರನ್ನು 18 ಕೋಟಿ ರೂ.ಗಳಿಂದ 14 ಕೋಟಿ ರೂ.ಗಳಿಗೆ ಕಡಿಮೆ ಮಾಡಿ ಆರ್‌ಆರ್‌ಗೆ ಕಳುಹಿಸಲಾಗಿದೆ. ಸ್ಯಾಮ್ ಕರನ್ ಅವರನ್ನು 2.4 ಕೋಟಿ ರೂ.ಗಳಲ್ಲಿ ವರ್ಗಾಯಿಸಲಾಗಿದೆ. ಸಂಜು ಸ್ಯಾಮ್ಸನ್ 18 ಕೋಟಿ ರೂ.ಗಳಲ್ಲಿ ಸಿಎಸ್‌ಕೆಗೆ ಬಂದಿದ್ದಾರೆ. ಈ ಡೀಲ್ ಐಪಿಎಲ್‌ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದಿದ್ದು, ಎರಡೂ ತಂಡಗಳು ತಮ್ಮ ತಂಡ ಸಂಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡಿವೆ.

ತವರು ಮನೆಗೆ ಮರಳಿದ ಜಡೇಜಾಗೆ

ಐಪಿಎಲ್‌ನಲ್ಲಿ ಉದ್ಘಾಟನೆ 2008ರಲ್ಲಿ  ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್‌ ಪರವೇ ಜಡೇಜಾ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಈ ಸೀಸನ್‌ನಲ್ಲಿ ಆರ್‌ಆರ್ ಚಾಂಪಿಯನ್ ಆಗಿತ್ತು. 2009ರಲ್ಲೂ ಆರ್‌ಆರ್‌ ಪರವೇ ಆಡಿದ್ದ ಜಡ್ಡು, ನಂತರ ಕೊಚ್ಚಿ ಟಸ್ಕರ್ಸ್, 2012ರಿಂದ ಸಿಎಸ್‌ಕೆಗೆ ಸೇರಿ 12 ವರ್ಷಗಳ ಕಾಲ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದ್ದರು. 

ಸಿಎಸ್‌ಕೆ ಪರ 250ಕ್ಕೂ ಹೆಚ್ಚು ಪಂದ್ಯಗಳನ್ನ ಆಡಿ ಅದರಲ್ಲಿ 5 ಬಾರಿ ಚಾಂಪಿಯನ್‌ನ್ನಾಗಿ ಮಾಡಿದ್ದಾರೆ. ವಿಶೇಷವಾಗಿ 2023ರ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೊನೇಯ ಎರಡು ಎಸೆತಗಳಲ್ಲಿ ಸಿಕ್ಸ್ ಮತ್ತು ಬೌಂಡರಿ ಬಾರಿಸಿ ಸಿಎಸ್‌ಕೆಗೆ ಟ್ರೋಫಿ ತಂದುಕೊಟ್ಟಿದ್ದರು. ಎಂ.ಎಸ್. ಧೋನಿ ನಂತರ ಸಿಎಸ್‌ಕೆಯ ಮತ್ತೊಂದು ಮುಖ ಎನ್ನಿಸಿಕೊಂಡಿದ್ದ ಜಡೇಜಾ ಈಗ ಆರ್‌ಆರ್‌ಗೆ ಮರಳಿದ್ದು, ಅಲ್ಲಿ ನಾಯಕತ್ವದ ಜವಾಬ್ದಾರಿ ಕೂಡ ನಿರೀಕ್ಷಿಸಲಾಗಿದೆ.

ಟ್ರೇಡ್‌ನ ನಂತರ ಜಡೇಜಾ ಹೇಳಿಕೆ ನೀಡಿ, “ರಾಜಸ್ಥಾನ್ ರಾಯಲ್ಸ್ ನನಗೆ ಮೊದಲ ವೇದಿಕೆ ಮತ್ತು ಮೊದಲ ಗೆಲುವು ನೀಡಿತು. ಮತ್ತೆ ಮರಳುವುದು ವಿಶೇಷ. ಇದು ಕೇವಲ ತಂಡವಲ್ಲ, ಮನೆಯೇ. ಪ್ರಸಕ್ತ ತಂಡದೊಂದಿಗೆ ಇನ್ನಷ್ಟು ಟ್ರೋಫಿಗಳನ್ನು ಗೆಲ್ಲುವ ಆಸೆ ಇದೆ” ಎಂದಿದ್ದಾರೆ.

ಸಂಜು ಸ್ಯಾಮ್ಸನ್ ಅವರಿಗೆ ಇದು ಹೊಸ ಅಧ್ಯಾಯ. 2013ರಿಂದ ಆರ್‌ಆರ್‌ ಪರ 11 ವರ್ಷಗಳ ಕಾಲ ಆಡಿದ್ದ ಸಂಜು, 2021ರಿಂದ ನಾಯಕನಾಗಿ ತಂಡವನ್ನು 2022ರ ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ 2025ರ ಐಪಿಎಲ್ ನಂತರ ಬದಲಾವಣೆ ಬಯಸಿದ್ದ ಸಂಜು ಈಗ ಸಿಎಸ್‌ಕೆಗೆ ಬಂದಿದ್ದು, ಧೋನಿ ನಿವೃತ್ತಿಯ ನಂತರದ ದೀರ್ಘಕಾಲಿಕ ಯೋಜನೆಯಲ್ಲಿ ವಿಕೆಟ್‌ಕೀಪರ್-ಬ್ಯಾಟರ್ ಮತ್ತು ನಾಯಕತ್ವಕ್ಕೆ ಸಿದ್ಧನಾಗಲಿದ್ದಾರೆ. ಸಿಎಸ್‌ಕೆಗೆ ಟಾಪ್ ಆರ್ಡರ್‌ಗೆ ದೊಡ್ಡ ಬಲ ತಂದುಕೊಡಲಿದ್ದಾರೆ.

ಈ ಟ್ರೇಡ್‌ನಿಂದ ಸಿಎಸ್‌ಕೆ ತಂಡವನ್ನು ಯುವ ಆಟಗಾರರತ್ತ ತಿರುಗಿಸುತ್ತಿದ್ದು, ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಹೊಸ ಯುಗ ಶುರುವಾಗಲಿದೆ. ಆದರೆ ಸ್ಪಿನ್ ಬೌಲಿಂಗ್ ಮತ್ತು ಆಲ್‌ರೌಂಡ್ ಬ್ಯಾಲೆನ್ಸ್‌ನಲ್ಲಿ ಕೊರತೆ ಬರಬಹುದು. ಆರ್‌ಆರ್‌ಗೆ ಜಡೇಜಾ ಮತ್ತು ಕರನ್ ಸೇರ್ಪಡೆಯಿಂದ ಮಿಡಲ್ ಆರ್ಡರ್ ಮತ್ತು ಬೌಲಿಂಗ್ ಡೆಪ್ತ್ ಬಲಗೊಳ್ಳಲಿದೆ.

ಇದನ್ನೂ ಓದಿ | ಹರ್ಮನ್‌ಪ್ರೀತ್ ಕೌರ್: ಸಮಾಜದ ಟೀಕೆಗಳಿಗೆ ವಿಶ್ವಕಪ್‌ ಮೂಲಕ ಉತ್ತರ

ಈ ಟ್ರೇಡ್ ಐಪಿಎಲ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಕೆಲವರು ಆರ್‌ಆರ್‌ಗೆ ಲಾಭದಾಯಕ ಡೀಲ್ ಎನ್ನುತ್ತಿದ್ದಾರೆ. ಜಡೇಜಾ ವಯಸ್ಸು 37ರ ಸನಿಹದಲ್ಲಿರುವುದು ಮತ್ತು ಸ್ಯಾಮ್ಸನ್ 31 ವರ್ಷದಲ್ಲಿರುವುದನ್ನು ಗಮನಿಸಿ ಕೆಲವರು ಸಿಎಸ್‌ಕೆ ದೀರ್ಘಾವಧಿಯಲ್ಲಿ ಲಾಭ ಪಡೆಯುತ್ತದೆ ಎನ್ನುತ್ತಾರೆ. ಆದರೆ ಜಡೇಜಾ ಅವರ ಅನುಭವ ಮತ್ತು ಮ್ಯಾಚ್-ವಿನ್ನಿಂಗ್ ಸಾಮರ್ಥ್ಯ ಆರ್‌ಆರ್‌ಗೆ ತಕ್ಷಣದ ಬಲ ನೀಡಲಿದೆ. 2026ರ ಐಪಿಎಲ್‌ಗೆ ಮಿನಿ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದ್ದು, ಎರಡೂ ತಂಡಗಳು ಈಗ ಹೊಸ ತಂತ್ರಗಳೊಂದಿಗೆ ಸಿದ್ಧತೆ ನಡೆಸುತ್ತಿವೆ. ಈ ಟ್ರೇಡ್ ಐಪಿಎಲ್‌ ಅಭಿಮಾನಿಗಳಲ್ಲಿ ದೊಡ್ಡ ಉತ್ಸಾಹ ಮೂಡಿಸಿದೆ.

Share:

ಮತ್ತಷ್ಟು ಸುದ್ದಿ

india labour line

ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಖಂಡನೆ: ಕಾರ್ಮಿಕ ಹಿತ ರಕ್ಷಣೆಗೆ ಇಂಡಿಯಾ ಲೇಬರ್ ಲೈನ್ ಬದ್ಧ

ದೇಶದ ಅಭಿವೃದ್ಧಿಗೆ ತಮ್ಮ ಶ್ರಮವನ್ನು ಅರ್ಪಿಸುತ್ತಿರುವ ವಲಸೆ ಕಾರ್ಮಿಕರು ಇಂದು ಮಾಲೀಕರಿಂದ ವಿವಿಧ ರೀತಿಯ ಶೋಷಣೆಗೆ ಒಳಗಾಗುತ್ತಿರುವುದು ಅತ್ಯಂತ ವಿಷಾದನೀಯವಾಗಿದೆ.

karnataka to rename

ರಾಜ್ಯದ ಎಲ್ಲಾ ಪಂಚಾಯಿತಿ ಇನ್ಮುಂದೆ ‘ಗಾಂಧಿ ಪಂಚಾಯಿತಿ’:  ಡಿಕೆಶಿ ಘೋಷಣೆ

ಮಹಾತ್ಮ ಗಾಂಧೀಜಿಯವರ ಹೆಸರನ್ನು ಗ್ರಾಮೀಣ ಭಾಗದಲ್ಲಿ ಶಾಶ್ವತವಾಗಿ ಉಳಿಸುವ ಮತ್ತು ಅವರ ಗ್ರಾಮ ಸ್ವರಾಜ್ಯದ ಕನಸನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ

karnataka to recruit

ಮುಂದಿನ ಶೈಕ್ಷಣಿಕ ವರ್ಷದೊಳಗೆ 10,800 ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಲು ಮತ್ತು ಶಿಕ್ಷಕರ ಕೊರತೆಯನ್ನು ಶಾಶ್ವತವಾಗಿ ನೀಗಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಮುಂದೆ ಓದಿ »
lalbagh flower show 2026

ಲಾಲ್‌ಬಾಗ್ ಫ್ಲವರ್ ಶೋಗೆ ತೆರೆ : 8 ಲಕ್ಷಕ್ಕೂ ಅಧಿಕ ಜನರ ವೀಕ್ಷಣೆ!

ಬೆಂಗಳೂರಿನ ಕಿರೀಟಪ್ರಾಯವಾದ ಲಾಲ್‌ಬಾಗ್‌ನಲ್ಲಿ ಕಳೆದ ಹದಿಮೂರು ದಿನಗಳಿಂದ ಕಣ್ಮನ ಸೆಳೆಯುತ್ತಿದ್ದ 219ನೇ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಈಗ ತೆರೆ ಬಿದ್ದಿದೆ.

ಮುಂದೆ ಓದಿ »
bangalore atm cash theft

ಎಟಿಎಂಗೆ ತುಂಬಬೇಕಿದ್ದ 1.37 ಕೋಟಿ ರೂ. ದೋಚಿ ನೌಕರರು ಎಸ್ಕೇಪ್!

ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಗದು ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ ಸಿಬ್ಬಂದಿಗಳೇ ಹಣ

ಮುಂದೆ ಓದಿ »