ಹೈಕೋರ್ಟ್‌ನಿಂದ ರಸ್ತೆ ಅಪಘಾತ ಪರಿಹಾರಕ್ಕೆ ಮಹತ್ವದ ಆದೇಶ: ಭತ್ಯೆಗಳನ್ನು ವೇತನದೊಂದಿಗೆ ಪರಿಗಣಿಸಿ

ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಪರಿಹಾರವನ್ನು ನಿಗದಿಪಡಿಸುವಾಗ, ಮೃತರ ಮೂಲ ವೇತನದ ಜೊತೆಗೆ ಉದ್ಯೋಗದಾತರಿಂದ ಒದಗಿಸಲಾದ ಭತ್ಯೆಗಳನ್ನು ಸೇರಿಸಿ ಮಾಸಿಕ ಆದಾಯವನ್ನು ಲೆಕ್ಕಾಚಾರ ಮಾಡಬೇಕೆಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಮಹತ್ವದ ಆದೇಶವನ್ನು ಹೊರಡಿಸಿದೆ.
Karnataka HC Sets 3-Week Deadline for State on Mandatory Kannada in Schools!

ಬೆಂಗಳೂರು: ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೋಟಾರು ವಾಹನ ಕಾಯಿದೆ (MV Act) ಅಡಿಯಲ್ಲಿ ಪರಿಹಾರವನ್ನು ನಿಗದಿಪಡಿಸುವಾಗ, ಮೃತರ ಮೂಲ ವೇತನದ ಜೊತೆಗೆ ಉದ್ಯೋಗದಾತರಿಂದ ಒದಗಿಸಲಾದ ಸವಲತ್ತುಗಳಾದ ವಾಹನ ಭತ್ಯೆ, ರಜಾ ಭತ್ಯೆ, ಬೋನಸ್, ಆಹಾರ ವ್ಯಾಲೆಟ್ ಮತ್ತು ಇತರೆ ಭತ್ಯೆಗಳನ್ನು ಸೇರಿಸಿ ಮಾಸಿಕ ಆದಾಯವನ್ನು ಲೆಕ್ಕಾಚಾರ ಮಾಡಬೇಕೆಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಆದೇಶವನ್ನು ನ್ಯಾಯಮೂರ್ತಿಗಳಾದ ಕೆ.ಎಸ್. ಮುದ್ಗಲ್ ಮತ್ತು ಕೆ.ವಿ. ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜೂನ್ 3, 2025 ರಂದು ಪ್ರಕಟಿಸಿದೆ.

ಪ್ರಕರಣದ ವಿವರ

ಮೃತ ಸಂತೋಷ್ ಕುಮಾರ್ ಸಿಂಗ್ ಅವರು ಬೆಂಗಳೂರಿನ ಎಚ್‌ಸಿಎಲ್ ಕಂಪನಿಯಲ್ಲಿ ತಾಂತ್ರಿಕ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ತಿಂಗಳಿಗೆ 1,37,350 ರೂ. ವೇತನವನ್ನು ಪಡೆಯುತ್ತಿದ್ದರು. ಜನವರಿ 29, 2019 ರಂದು ರಸ್ತೆ ಅಪಘಾತವೊಂದರಲ್ಲಿ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಮೋಟಾರು ಅಪಘಾತಗಳ ಪರಿಹಾರ ನ್ಯಾಯಾಧಿಕರಣ ವಿಚಾರಣೆಯ ಸಂದರ್ಭದಲ್ಲಿ ಮೃತರ ವೇತನವನ್ನು 53,000 ರೂ. ಎಂದು ಪರಿಗಣಿಸಿ, ಕೇವಲ 40,000 ರೂ. ಮಾಸಿಕ ಆದಾಯವನ್ನು ಆಧರಿಸಿ 81 ಲಕ್ಷ ರೂ. ಪರಿಹಾರವನ್ನು ಶೇ. 6 ಬಡ್ಡಿಯೊಂದಿಗೆ ನಿಗದಿಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೃತರ ಕುಟುಂಬಿಕರು ಮತ್ತು ವಿಮಾ ಕಂಪನಿಯು ಕರ್ನಾಟಕ ಹೈಕೋರ್ಟ್‌ಗೆ ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದವು.

ನ್ಯಾಯಾಲಯವು ಮೃತರ ವೇತನ ಚೀಟಿಗಳು ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಿ, ಟ್ಯಾಂಕರ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂದು ದೃಢಪಡಿಸಿತು. ವಿಮಾ ಕಂಪನಿಯ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, “ಮೃತರಿಗೆ ಒದಗಿಸಲಾದ ವಾಹನ ಭತ್ಯೆ, ರಜಾ ಭತ್ಯೆ, ಕಾರ್ಯಕ್ಷಮತೆಯ ಬೋನಸ್, ಆಹಾರ ವ್ಯಾಲೆಟ್ ಮತ್ತು ಇತರೆ ಭತ್ಯೆಗಳು ನಿಯಮಿತವಾಗಿ ಪಾವತಿಯಾಗುತ್ತಿದ್ದವು. ಇವು ಉದ್ಯೋಗದ ಭಾಗವಾಗಿದ್ದು, ವೇತನದ ಒಟ್ಟಾರೆ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗಿವೆ. ಆದ್ದರಿಂದ, ಈ ಭತ್ಯೆಗಳನ್ನು ಮಾಸಿಕ ಆದಾಯದೊಂದಿಗೆ ಪರಿಗಣಿಸಬೇಕು” ಎಂದು ತೀರ್ಪು ನೀಡಿತು.

ನ್ಯಾಯಾಲಯವು ಸುಪ್ರೀಂ ಕೋರ್ಟ್‌ನ ನ್ಯಾಷನಲ್ ಇನ್ಸೂರೆನ್ಸ್ ಕಂ. ಲಿ. ವಿರುದ್ಧ ಪ್ರಣಯ್ ಸೇಠಿ [(2017) 16 SCC 680] ತೀರ್ಪನ್ನು ಉಲ್ಲೇಖಿಸಿ, “ಕೇವಲ ಮೂಲ ವೇತನವನ್ನಷ್ಟೇ ಪರಿಗಣಿಸುವುದು ಸರಿಯಲ್ಲ. ಒಟ್ಟಾರೆ ಆದಾಯದಿಂದ ತೆರಿಗೆಯನ್ನು ಕಡಿತಗೊಳಿಸಿದ ನಂತರ ಉಳಿದ ಮೊತ್ತವನ್ನು ಪರಿಹಾರ ಲೆಕ್ಕಾಚಾರಕ್ಕೆ ಬಳಸಬೇಕು” ಎಂದು ಸ್ಪಷ್ಟಪಡಿಸಿತು. ಈ ಆಧಾರದ ಮೇಲೆ, ನ್ಯಾಯಾಧಿಕರಣದ 81 ಲಕ್ಷ ರೂ. ಪರಿಹಾರವನ್ನು 2.27 ಕೋಟಿ ರೂ.ಗೆ ಹೆಚ್ಚಿಸಲಾಯಿತು. ವಿಮಾ ಕಂಪನಿಗೆ ಈ ಮೊತ್ತವನ್ನು 4 ವಾರಗಳ ಒಳಗೆ ಠೇವಣಿಯಿಡಲು ಸೂಚಿಸಲಾಗಿದೆ.

ಮೋಟಾರು ವಾಹನ ಕಾಯಿದೆ, 1988 ರ ಸೆಕ್ಷನ್ 168 ರ ಪ್ರಕಾರ, “ನ್ಯಾಯಯುತ ಪರಿಹಾರ”ವನ್ನು ನಿಗದಿಪಡಿಸುವುದು ನ್ಯಾಯಾಧಿಕರಣದ ಕರ್ತವ್ಯವಾಗಿದೆ. ಈ ಪರಿಹಾರವು ಸಮಂಜಸ, ನ್ಯಾಯಸಮ್ಮತ ಮತ್ತು ಸಮಾನವಾಗಿರಬೇಕು. ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಆಧರಿಸಿ, ಆದಾಯ ಲೆಕ್ಕಾಚಾರದಲ್ಲಿ ವೇತನದ ಜೊತೆಗೆ ಭತ್ಯೆಗಳನ್ನು ಸೇರಿಸುವುದು ಕಡ್ಡಾಯವಾಗಿದೆ, ವಿಶೇಷವಾಗಿ ಅವು ನಿಯಮಿತವಾಗಿ ಪಾವತಿಯಾಗುತ್ತಿದ್ದರೆ. ಈ ತೀರ್ಪು ಭವಿಷ್ಯದಲ್ಲಿ ರಸ್ತೆ ಅಪಘಾತ ಪರಿಹಾರ ಪ್ರಕರಣಗಳಿಗೆ ಒಂದು ಮಾದರಿಯಾಗಲಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »