‘ಅಪಾಯಕಾರಿ’ ಲೇಬಲ್‌ನೊಂದಿಗೆ ಇನ್ಮುಂದೆ ಜಿಲೇಬಿ, ಸಮೋಸಾ

ತಿನಿಸು ಪ್ರಿಯರನ್ನು ಕೈಬೀಸಿ ಕರೆಯುವ ಜಿಲೇಬಿ, ಸಮೋಸಾ, ಬಿಸ್ಕೆಟ್ ಹಾಗೂ ಚಹಾ ಇನ್ನುಮುಂದೆ ಸಿಗರೇಟ್ನಂತೆ ʼಅಪಾಯಕಾರಿʼ ಎಂಬ ಲೇಬಲ್‌ನೊಂದಿಗೆ ಸಿಗಲಿವೆ.
Harmful Warning

ಸಂಜೆಯಾಗುತ್ತಿದ್ದಂತೆ ತಿನಿಸು ಪ್ರಿಯರನ್ನು ಕೈಬೀಸಿ ಕರೆಯುವ ಜಿಲೇಬಿ, ಸಮೋಸಾ, ಬಿಸ್ಕೆಟ್ ಹಾಗೂ ಚಹಾ ಇನ್ನುಮುಂದೆ ಸಿಗರೇಟ್ನಂತೆ ʼಅಪಾಯಕಾರಿʼ ಎಂಬ ಲೇಬಲ್‌ನೊಂದಿಗೆ ಸಿಗಲಿವೆ.

ಆರೋಗ್ಯ ಸಚಿವಾಲಯವು, ನಾಗ್ಪುರ್ ಎಐಐಎಂಎಸ್ ಸೇರಿದಂತೆ ಎಲ್ಲ ಕೇಂದ್ರೀಯ ಸಂಸ್ಥೆಗಳಿಗೆ, ಜನಸಾಮಾನ್ಯರು ತಿನ್ನುವ ತಿಂಡಿ, ತಿನಿಸುಗಳು ಎಷ್ಟು ಎಣ್ಣೆಯ ಅಂಶ ಮತ್ತು ಸಕ್ಕರೆಯ ಅಂಶಹೊಂದಿದೆ ಎಂಬ ಫಲಕವನ್ನು ಎದ್ದುಕಾಣುವಹಾಗೆ ಅಳವಡಿಸುವಂತೆ ಸೂಚನೆ ನೀಡಿದೆ. ಸಿಗರೇಟಿನಂತೆಯೇ ಈ ಜಂಕ್ ಫುಡ್ಗಳು ಸಹ ಹಾನಿಕಾರಕ ಎಂದು ಜಾಗೃತಿ ಮೂಡಿಸಲು ಈ ಪ್ರಯತ್ನ ಮೊದಲ ಹೆಜ್ಜೆ ಎನ್ನಲಾಗಿದೆ.

ಸಾಂಪ್ರದಾಯಿಕ ಆಹಾರವೆಂದು ಸೇವಿಸಲಾಗುವ ಈ ಆಹಾರಗಳು ಎಷ್ಟು ಜಿಡ್ಡಿನ ಅಂಶ ಮತ್ತು ಸಕ್ಕರೆಯನ್ನು ಹೊಂದಿವೆ ಎನ್ನುವುದು ಜನಸಾಮಾನ್ಯರ ಗಮನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳು ಶಾಂತವಾದ ಆದರೆ, ತೀಕ್ಷಣವಾದ ಜ್ಞಾಪನೆಗಳನ್ನು ಎಚ್ಚರಿಕೆಯಾಗಿ ಬಳಸುವ ಗುರಿಹೊಂದಿವೆ. ಈ ಎಚ್ಚರಿಕೆ ಫಲಕಗಳನ್ನು ಕೆಫೆಟೇರಿಯಾ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುವುದು. ಜಿಲೇಬಿ, ಸಮೋಸಾ ಹಾಗೂ ಚಾಯ್ ಮಾತ್ರವಲ್ಲ, ಲಡ್ಡೂ, ವಡಾಪಾವ್, ಪಕೋಡಾಗಳನ್ನೂ ಸಹ ಪರಿಶಿಲಿಸಲಾಗುತ್ತಿದೆ ಎಂದು ನಾಗ್ಪರ್ ಎಐಐಎಂಎಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಸರ್ಕಾರದ ಆಂತರಿಕ ಟಿಪ್ಪಣಿಯೊಂದು ದೇಶದಲ್ಲಿ ಬಿಕ್ಕಟ್ಟಾಗಿ ಪರಿಣಮಿಸುತ್ತಿರುವದರ ಬಗ್ಗೆ ಬೆಳಕು ಚೆಲ್ಲಿದ್ದು, 2050ರ ವೇಳೆಗೆ ಭಾರತದ 44.9 ಕೋಟಿಗೂ ಹೆಚ್ಚು ಜನ ಅಧಿಕ ತೂಕ ಮತ್ತು ಬೊಜ್ಜು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಪ್ರತೀ ಐದು ಜನ ವಯಸ್ಕರಲ್ಲಿ ಒಬ್ಬರು ಅಧಿಕ ತೂಕ ಹೊಂದಿದವರಾಗಿದ್ದಾರೆ. ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆ ಈ ಕಳವಳವನ್ನು ಇನ್ನಷ್ಟು ಹೆಚ್ಚು ಮಾಡಿದೆ.

ಇದನ್ನೂ ಓದಿ | ಆಹಾರ ಸುರಕ್ಷತೆ ತಪಾಸಣೆ: 406 ಬೀದಿಬದಿ ಮಾರಾಟಗಾರರಿಗೆ ನೋಟಿಸ್

ಇದು ಆಹಾರವನ್ನು ನಿಷೇಧಿಸುವ ವಿಚಾರವಲ್ಲ. ಬದಲಿಗೆ, ಒಂದು ಗುಲಾಬ್ ಜಾಮೂನಿನಲ್ಲಿ ಐದು ಟೀ ಚಮಚ ಸಕ್ಕರೆ ಇರಬಹುದು ಎಂದು ಜನ ತಿಳಿದಾಗ, ಅವರು ಅದನ್ನು ತಿನ್ನುವ ಮೊದಲು ಎರಡುಬಾರಿ ಯೋಚಿಸಬಹುದು. ಒಟ್ಟಿನಲ್ಲಿ ʼತಿಳಿದು ತಿನ್ನಿʼ ಎನ್ನುತ್ತಿದ್ದಾರೆ ತಜ್ಞರು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »