ಭಾರತದ CMಗಳ ಆರ್ಥಿಕ ಸ್ಥಿತಿಗತಿ ಪಟ್ಟಿ ಬಿಡುಗಡೆ: ಸಿದ್ದುಗೆ 3ನೇ ಸ್ಥಾನ  

ಭಾರತದಲ್ಲಿನ ಮುಖ್ಯಮಂತ್ರಿಗಳ ಆಸ್ತಿ ವಿವರಗಳನ್ನು ವಿಶ್ಲೇಷಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಆಗಸ್ಟ್ 22ರಂದು ಬಿಡುಗಡೆ ಮಾಡಿದೆ.
India richest CMs 2025 

ಭಾರತದಲ್ಲಿನ ಮುಖ್ಯಮಂತ್ರಿಗಳ ಆಸ್ತಿ ವಿವರಗಳನ್ನು ವಿಶ್ಲೇಷಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಆಗಸ್ಟ್ 22ರಂದು ಬಿಡುಗಡೆ ಮಾಡಿದ ವರದಿಯು ದೇಶದ ರಾಜಕೀಯ ನಾಯಕರ ಆರ್ಥಿಕ ಸ್ಥಿತಿಯನ್ನು ಬೆಳಕಿಗೆ ತಂದಿದೆ. ಮಣಿಪುರವನ್ನು ಹೊರತುಪಡಿಸಿ, ದೇಶದ 28 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 30 ಮುಖ್ಯಮಂತ್ರಿಗಳ ಸ್ವಯಂ ಘೋಷಿತ ಆಸ್ತಿ ಪ್ರಮಾಣಪತ್ರಗಳನ್ನು (ಅಫಿಡವಿಟ್) ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಈ 30 ಮುಖ್ಯಮಂತ್ರಿಗಳ ಸರಾಸರಿ ಆಸ್ತಿ ಮೌಲ್ಯ 54.42 ಕೋಟಿ ರೂಪಾಯಿಗಳು, ಮತ್ತು ಒಟ್ಟು ಆಸ್ತಿ 1,632 ಕೋಟಿ ರೂಪಾಯಿಗಳು ಎಂದು ವರದಿ ತಿಳಿಸಿದೆ.

ಇದರಲ್ಲಿ ಗಮನಾರ್ಹವಾಗಿ, ಇಬ್ಬರು ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳಾಗಿದ್ದು, ಆಂಧ್ರಪ್ರದೇಶದ ನಾರಾ ಚಂದ್ರಬಾಬು ನಾಯ್ಡು 931 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದರೆ, ಅರುಣಾಚಲ ಪ್ರದೇಶದ ಪೆಮಾ ಖಂಡು 332 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ .ಹಾಗೆಯೇ ಮೂರನೇ ಸ್ಥಾನದಲ್ಲಿ ಕರ್ನಾಟಕದ ಸಿದ್ದರಾಮಯ್ಯ ಅವರು 51 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ.

ಮೊದಲ ಮೂರು ಶ್ರೀಮಂತ ಮುಖ್ಯಮಂತ್ರಿಗಳು:

ಮೊದಲ ಸ್ಥಾನದಲ್ಲಿರುವ ಚಂದ್ರಬಾಬು ನಾಯ್ಡು ಅವರ ಆಸ್ತಿ ಮೂಲವು ಅವರ ಪತ್ನಿ ನಾರಾ ಭುವನೇಶ್ವರಿ ಅವರ ಹೆರಿಟೇಜ್ ಫುಡ್ಸ್ ಲಿಮಿಟೆಡ್‌ನ ಷೇರುಗಳು. ಇದು 1992ರಲ್ಲಿ ಸ್ಥಾಪಿತವಾದ ಕಂಪನಿಯಾಗಿದ್ದು, ನಾಯ್ಡು ಅವರು ಮುಖ್ಯಮಂತ್ರಿಯಾಗುವ ಮೊದಲು ಆರಂಭಿಸಿದ್ದು. ಎರಡನೇ ಸ್ಥಾನದಲ್ಲಿರುವ ಪೆಮಾ ಖಂಡು ಅವರ ಆಸ್ತಿ 332 ಕೋಟಿ ರೂಪಾಯಿಗಳು. ಮೂರನೇ ಸ್ಥಾನದಲ್ಲಿ ಕರ್ನಾಟಕದ ಸಿದ್ದರಾಮಯ್ಯ ಅವರು 51 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ.  

ಕಡಿಮೆ ಆಸ್ತಿ ಹೊಂದಿದ ಮುಖ್ಯಮಂತ್ರಿಗಳು : 

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರು 15.38 ಲಕ್ಷ ರೂಪಾಯಿಗಳ ಆಸ್ತಿ ಹೊಂದಿದ್ದು ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಜಮ್ಮು ಮತ್ತು ಕಾಶ್ಮೀರದ ಓಮರ್ ಅಬ್ದುಲ್ಲಾ (55.24 ಲಕ್ಷ ರೂಪಾಯಿಗಳು), ಮೂರನೇಯದು ಕೇರಳದ ಪಿನರಾಯಿ ವಿಜಯನ್ (1.18 ಕೋಟಿ ರೂಪಾಯಿಗಳು), ನಾಲ್ಕನೇಯದು ರಾಜಸ್ಥಾನದ ಭಜನ್ ಲಾಲ್ ಶರ್ಮಾ (1.46 ಕೋಟಿ ರೂಪಾಯಿಗಳು), ಮತ್ತು ಐದನೇಯದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ (1.54 ಕೋಟಿ ರೂಪಾಯಿಗಳು).  

ಈ ವರದಿಯು ಮುಖ್ಯಮಂತ್ರಿಗಳ ಆಸ್ತಿ ಮಾತ್ರವಲ್ಲದೆ, ಅವರ ಶಿಕ್ಷಣ, ವಯಸ್ಸು, ಲಿಂಗ ಮತ್ತು ಅಪರಾಧ ಪ್ರಕರಣಗಳ ಬಗ್ಗೆಯೂ ಮಾಹಿತಿ ನೀಡಿದೆ. ಆಸ್ತಿ ವಿವರಗಳು ಕಳೆದ ಚುನಾವಣೆಗಳ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ಗಳಿಂದ ಪಡೆಯಲಾಗಿದ್ದು, ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಇರುವ ಕಾರಣ ಅದನ್ನು ಹೊರಗಿಡಲಾಗಿದೆ. ರಾಜಕೀಯದಲ್ಲಿ ಆರ್ಥಿಕ ಅಸಮಾನತೆಯನ್ನು ಈ ವರದಿ ಎತ್ತಿ ತೋರಿಸಿದ್ದು, ಅತ್ಯಂತ ಶ್ರೀಮಂತರಿಂದ ಅತ್ಯಂತ ಬಡವರವರೆಗಿನ ವ್ಯತ್ಯಾಸವನ್ನು ಬಯಲಿಗೆಳೆದಿದೆ.

ಇದನ್ನೂ ಓದಿ | ಸಿದ್ದು v/s ಯತ್ನಾಳ್: ವಿಧಾನಸಭೆಯ ಉಚ್ಚಾಟನೆ ಜಗಳ ವೈರಲ್‌

ಈ ವರದಿಯಲ್ಲಿ ಅಪರಾಧ ಪ್ರಕರಣಗಳ ಬಗ್ಗೆಯೂ ಮಾಹಿತಿ ನೀಡಿದ್ದು, 30 ಮುಖ್ಯಮಂತ್ರಿಗಳಲ್ಲಿ 12 ಮಂದಿ (40%) ತಮ್ಮ ವಿರುದ್ಧ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರು ಮೂರನೇ ಅತಿ ಹೆಚ್ಚು ಅಪರಾಧ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿವೆ. ಇದು ರಾಜಕೀಯ ನಾಯಕರ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಪ್ರಶ್ನಿಸುತ್ತದೆ.

ಇದಲ್ಲದೆ, ಲಿಂಗ ಅಸಮಾನತೆಯೂ ಸ್ಪಷ್ಟವಾಗಿದ್ದು, ಕೇವಲ 2 ಮಹಿಳಾ ಮುಖ್ಯಮಂತ್ರಿಗಳು (ಮಮತಾ ಬ್ಯಾನರ್ಜಿ ಮತ್ತು ರೇಖಾ ಗುಪ್ತಾ)(7%) ಇದ್ದಾರೆ. ಶಿಕ್ಷಣ ಮಟ್ಟದಲ್ಲಿ, 30% ಪದವೀಧರರು, 20% ವೃತ್ತಿಪರ ಪದವೀಧರರು, 27% ಸ್ನಾತಕೋತ್ತರರು, 7% ಡಾಕ್ಟರೇಟ್ ಹೊಂದಿದ್ದಾರೆ. ವಯಸ್ಸಿನ ಗುಂಪುಗಳಲ್ಲಿ, 51-60 ವರ್ಷದ 12 ಮಂದಿ, 71-80 ವರ್ಷದ 6 ಮಂದಿ ಸೇರಿದ್ದಾರೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »